Tuesday, July 28, 2009

ಹಡಿನಬಾಳ ಯಕ್ಷಪರ್ವ - ನಾ ಕಂಡಂತೆ

ಕಳೆದ ಜುಲಾಯಿ ೫ ರಂದು ನಡೆದ ಈ ಕಾರ್ಯಕ್ರಮದ ರೂಪುರೇಶೆ ಆರಂಭವಾದದ್ದು ಬೇಸಿಗೆಯ ಶುರುವಿನಲ್ಲಿ.

ಬಡಗುತಿಟ್ಟಿನ ಆರ್ಥಿಕವಾಗಿ ದುರ್ಬಲವಾದ ಕಲಾವಿದರನ್ನು ಲಕ್ಷ ರೂಪಾಯಿಗಳೊಂದಿಗೆ ಸನ್ಮಾನಿಸುವ ಬೆಂಗಳೂರಿನ ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವು ಈ ವರ್ಷ ಆಯ್ದುಕೊಂಡಿದ್ದು ಪ್ರಸಿದ್ದ ಎರಡನೇ ವೇಷಧಾರಿಯಾದ ಹಡಿನಬಾಳ ಶ್ರೀಪಾದ ಹೆಗಡೆಯವನ್ನು. ಶ್ರೀ ವಿ.ಆರ್.ಹೆಗಡೆ ಯವರ ಈ ಆಯ್ಕೆಗೆ ಕಳೆದ ಸಾಲಿನಂತೆ ಯಾರಿಂದಲೂ ವಿರೋಧ ಉಂಟಾಗಲಿಲ್ಲ. ಸನ್ಮಾನಕ್ಕೆ ಯೋಗ್ಯರಾಗಿದ್ದ, ಕಡುಬಡತನದಲ್ಲೂ ಸ್ವಾಭಿಮಾನ ಜೀವನ ನಡೆಸುವ ಶ್ರೀಪಾದ ಹೆಗಡೆಯವರ ಬಗ್ಗೆ ಎಲ್ಲರಿಗೂ ಅಭಿಮಾನವಿತ್ತು ಹಾಗೆ ಅನುಕಂಪವೂ ಕೂಡಾ ಇತ್ತು. ಪ್ರಸಂಗ ಕನಕಾಂಗಿ ಕಲ್ಯಾಣ ಮಾಡಿ ಅಂತ ಒಬ್ಬರಿಂದ ಸಲಹೆ ಬಂದು ಅದೇ ಊರ್ಜಿತವಾಯಿತು. ಜುಲಾಯಿ ೫ ಕ್ಕೆ ಎ.ಡಿ.ಎ ರಂಗಮಂದಿರದಲ್ಲಿ ನಡೆಸುವ ತೀರ್ಮಾನವಾಯಿತು.

ಮೊದಲು ಮಾತಾಡಿದ್ದು ಸಂಘಟಕರೇ ಕಲಾವಿದರನ್ನು ಆಯ್ಕೆ ಮಾಡಬೇಕು ಹಾಗೂ ಚಿಟ್ಟಾಣಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು. ಮಾತಿನಂತೆ ಸಂಘಟಕರಾದ ಮನೋಜ ಭಟ್ಟರು, ಸುರೇಶ ಹೆಗಡೆಯವರು ಪಾತ್ರಗಳ ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಹೊತ್ತರು. ಸುರೇಶ ಹೆಗಡೆಯವರು ’ಅಭಿಮನ್ಯು’ವಿನ ಪಾತ್ರವನ್ನು ಬುಕ್ ಮಾಡಿದರೆ ಬೇರೆ ಪಾತ್ರಗಳಿಗೆ ಚಿಟ್ಟಾಣಿ, ಹೊಳ್ಳ, ಯಲಗುಪ್ಪ,ಶ್ರೀಧರ ಕಾಸರಕೋಡ್,ಸುಬ್ರಹ್ಮಣ್ಯ ಚಿಟ್ಟಾಣಿ, ಅರ್ಪಿತಾ ಹೆಗಡೆ ಮೊದಲಾದವರೆಲ್ಲ ಆಯ್ಕೆಯಾದರು

ಬೆಂಗಳೂರಿನ ಸೂಪರ್ ಹಿಟ್ ಭಾಗವತರಾದ ಕೊಳಗಿ ಕೇಶವ ಹೆಗಡೆ ಹಾಗೂ ಸರ್ವೇಶ್ವರ ಹೆಗಡೆ ಮುರೂರು ಆಯ್ಕೆಯಾದರೆ ಮದ್ದಲೆವಾದನಕ್ಕೆ ಶಂಕರ ಭಾಗವತರು ಎಂದು ಆಯ್ಕೆ ಮಾಡಿದರು ಚಂಡೆವಾದನಕ್ಕೆ ಅಮೃತದೇವ (ಅಂದರೆ ನಾನು)ನನ್ನು ಒಪ್ಪಿಸಲಾಯಿತು.

ಇನ್ನೇನು ಆಟಕ್ಕೆ ೪-೫ ದಿವಸ ಇದ್ದಾಗ ಶ್ರೀಪಾದ ಹೆಗಡೆಯವರು ಸಧ್ಯ ಬೆಂಗಳೂರಿನಲ್ಲೇ ಇರುವ ಕಣ್ಣೀಮನೆ ಗಣಪತಿ ಯವರು ಅಭಿಮನ್ಯುವಿನ ದ್ವಿತೀಯಾರ್ಧ ಪಾತ್ರ ಮಾಡಲಿ ಎಂದಾಗ ಸುರೇಶ ಹೆಗಡೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ ಮಾತುಕಥೆಗಳು ವಿಕೋಪಕ್ಕೆ ತಿರುಗಿ ಅಂತೂ ಕೊನೆಗೆ ಶ್ರೀಪಾದ ಹೆಗಡೆಯವರು ಮುಖಭಂಗಕ್ಕೊಳಗಾಗ ಬೇಕಾಯಿತು. ಆಮೇಲೆ ಚಂಡೆವಾದನಕ್ಕೆ ಅವರು (ಶ್ರೀಪಾದ ಹೆಗಡೆಯವರು )ಮೊದಲೇ ಮತ್ತೊಬ್ಬರಿಗೆ ಹೇಳಿರುವ ವಿಷಯ ಗೊತ್ತಾದರೂ ನಾನು ಅದಕ್ಕೆ ವಿರೋಧಿಸಲಿಲ್ಲ. ನನ್ನ ಅತೀ ಆತ್ಮೀಯರಲ್ಲಿ ಒಬ್ಬನಾದ ಕೆರೋಡಿ ಸುಬ್ಬಣ್ಣ ಅವತ್ತು ನನ್ನೊಂದಿಗೆ ಚಂಡೆವಾದನಕ್ಕೆ ಆಯ್ಕೆಯಾದರು. ಈ ಮಧ್ಯೆ ಶಂಕರ ಭಾಗವತರು ಆಟಕ್ಕೆ ಕೈಕೊಡುವ ವಿಷಯ ಸ್ಪಷ್ಠವಾದಾಗ ಸಾಲಿಗ್ರಾಮ ಮೇಳದ ನಾಗರಾಜ ಭಂಡಾರಿ, ಮತ್ತು ಬೆಂಗಳೂರಿನ ಉದ್ಯಮಿ ಗಣೇಶ ಭಂಡಾರಿಯವರನ್ನು ಒಪ್ಪಿಸಲಾಯಿತು. ((ಆಟದ ವಿಚಾರ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ)

1 comment:

Ragu Kattinakere said...

ಹಡಿನಬಾಳರ ಭಾಷಣ ಅದ್ಭುತವಾಗಿತ್ತು ಹೇಳಿ ಸುಮ೦ತ ಹೇಳಿದ.